ಇಳಿಹೊತ್ತು

ಸಂಜೆ… ಇಳಿ ಹೊತ್ತಿನಲಿ
ಏಕಾಂಗಿತನದಿ… ನಾ ಬೆಟ್ಟವೇರುತಿರಲು
ಬೆಳ್ಳಿಯಾಗಸವ ಭೇದಿಸುತ
ನಿಸರ್ಗದ ನೈರ್ಮಲ್ಯ ಆಲಿಸುತ
ನಿರ್ಲಿಪ್ತತೆಯ ನಿಷೆ ಆವರಿಸಿತ್ತು

ಆ ಬಿಳಿಯಾಗಸದಿ ಭೇದವನೆಣಿಸದೆ
ಬರಸೆಳೆದು ಮುತ್ತಿಡುತ…
ಜೋಡಿಯಲಿ – ಹತ್ತಿರವಾಗಿ…
ಬಾನಲಿ ಹಕ್ಕಿಗಳು ಹಾರುತಿರಲು
ಹಕ್ಕಿಗಳ ರಾಜ, ಎಲ್ಲಿ… ನಿನ್ನಾಕೆ
ಬರಸೆಳೆದು ಮುತ್ತಿಡು…
ಕುಳುತಿರುವಿ ಏಕೆ… ನಿರ್ಲಿಪ್ತದಿ…?
ಎನ್ನುತ ಆಗಸದಿ ಮರೆಯಾದವು

ಮನಸ್ಸು ಮರು ಮಾತಾಡದೆ
ಮೇಲೆ ಗಗನ ನೋಡುತ
ಬೆಳೆದ ಮರಗಳ ತಂಗಾಳಿಯಲಿ
ಜುಳು-ಜುಳು-ವೆನ್ನುತ ಸಾಗಿದ
ನೀರಿನ ಝರಿಯ ಆ ನಾದದಲಿ
ಕೋಮಲದ ಆ ಮಧುರ ಸ್ವರದಿ
ಎಲ್ಲಿ… ನಿನ್ನಾ… ಮಾಧುರಿ…?
ಗುನುಗು… ಮನ ಗರಬಡಿಸಿತು.

ಅಲ್ಲಾಡುವಾ ಪ್ರಶ್ನೆಗಳಿಗುತ್ತರಿಸಲೆ…
ಎನ್ನುತಲಿ, ಕತ್ತಲೆ ಮೃಗವು…
ಬೆನ್ನಟ್ಟಿ ನನಗರಿವಿಲ್ಲದೆ ಕಾಲುಗಳು
ಬೆಟ್ಟವಿಳಿಸುತ ಮನೆಯೆಡೆ ಓಡುತ್ತಾ
ತಳ್ಳುತಲಿ… ಕೊಂಡೊಯ್ದವು..

***

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಆಡ್ವಾಣಿ ಒಬ್ಬರೇ ಅಲ್ಲ ಟೋಟಲಿ ರಾಜಕಾರಣಿಗಳ ಗ್ರಹಗತಿನೇ ನೆಟ್ಟಗಿಲ್ರಿ
Next post ಪಯಣ

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

cheap jordans|wholesale air max|wholesale jordans|wholesale jewelry|wholesale jerseys